ಪೂಜೆ

ಎಲ್ಲಾ ಅಬ್ಬರಗಳ ನಡುವೆ ಮೆಲ್ಲಗೆ
ನಿನ್ನ ಧ್ವನಿ ನಿಟ್ಟುಸಿರು ಕೇಳಿಸುತ್ತದೆ
ಬೆವರ ಹನಿ ಗುಂಟ ಇಳಿದ ಶ್ರಮ
ಬೇಗುದಿಯಲಿ ಮಣ್ಣ ಅರಳಿಸಿ ನೀರು ಹನಿಸಿದೆ.

ಸೋಕಿದ ವ್ಯಾಪಕ ಗಾಳಿ ಎದೆಯೊಳಗೆ
ಇಳಿದು ಉಸಿರಾಡಿದ ಸದ್ದುಗಳು
ಹರಡಿ ಹಾಸಿವೆ ಗೊತ್ತೇ ಆಗದ ಹಾಗೆ
ಜೀವ ಜೋಡು ಅಲೆಯ ಬೆಲೆ ಹೆಣೆದಿವೆ.

ನಿನ್ನ ಬರವಿನಲಿ ತೇಲಿ ಸುಖದುಃಖ
ಒಳಹೊರಗೆ ಹಿತಮಿತ ಹೂವು ಗಂಧ
ಸಂಧಾನದ ಇರುವಿಕೆಯು ಭಾವ ಸುಳಿ
ಸುಳಿದು ಹರಿದು ತೇಲಿ ಜಾರಿದ ನದಿಬಯಲು.

ಸ್ನೇಹ ಮೋಹ ನೀಲಿ ಅಂಬರದ ಪಟ
ವರ್ಗ ವರ್ಣದಲಿ ಅದ್ದಿ ತೇಲಿ ತೂಗಿ
ಸೂತ್ರ ಬಿಗಿದ ಕಾಲು ನೆಲದಡಿ ಹೆಜ್ಜೆಯೂರಿ
ಮರುಕ್ಷಣ ಧ್ಯಾನಕ್ಕೆ ಉಕ್ಕಿದ ಕಡಲು.

ಮನಸ್ಸು ಮುತ್ತು ರತ್ನ ಹವಳದ
ದ್ವೀಪ ಬಿಂಬಗ್ರಾಹಿಗೆ ಜಾಗ ಉಂಟು
ಜಗದ ನಿತ್ಯಾರಾಧನೆಯ ಕಾಯಕದಲಿ
ಹೆಗಲಿಗೇರಿದ ಭಾರ ತಾನೇ ಇಳಿಯುವುದು
ಹೆಗರು ಪೂಜೆಯ ಕಾಯಕದಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಗರ ದೈತ್ಯ: ಆಕ್ಟೋಪಸ್
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೨೭

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys